

17th March 2026

ಕಾಸರಗೋಡು- ಇಲ್ಲಿಯ ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ ಡಾ. ವಾಮನ್ ರಾವ್ ಬೇಕಲ್ ರೀಗೆ ಕರ್ನಾಟಕದ ಪ್ರತಿಷ್ಠಿತ "ಹೊಯ್ಸಳ ಪ್ರಶಸ್ತಿ ".
ಮೈಸೂರು ನಗರದ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಕೊಡಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ "ಹೊಯ್ಸಳ ಪ್ರಶಸ್ತಿ "ಗಡಿನಾಡಿನ ಕನ್ನಡ ಸೇವೆ "ಯನ್ನು ಪರಿಗಣಿಸಿ ಡಾ. ವಾಮನ್ ರಾವ್ ಬೇಕಲ್ ಇವರನ್ನು ಆರಿಸಲಾಗಿದೆ ಎಂದು ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ, ಸಂಘಟಕರಾದ ರಂಗನಾಥ್ ಮೈಸೂರು ತಿಳಿಸಿದ್ದಾರೆ.
ಇದೇ ಬರುವ ಏಪ್ರಿಲ್ 5 ರಂದು ಮೈಸೂರಿನ ನಾದಬ್ರಹ್ಮ ಸಭಾಅಂಗಣದಲ್ಲಿ ಸವಿಗನ್ನಡ ಪತ್ರಿಕೆಯ 26 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ಸಂಚಾಲಕ ಡಾ. ರಘುರಾಮ್ ವಾಜಪೇಯಿ ತಿಳಿಸಿದ್ದಾರೆ.
ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ಲಭಿಸಿರುವದಕ್ಜೆ ಕನ್ನಡ ಭವನ ನಿರ್ದೆಶಕರು, ಸುದ್ದಿ ಸದ್ದು ಪತ್ರಿಕೆ ಸಂಪಾದಕರಾದ ಸಿ.ವಾಯ್.ಮೆಣಸಿನಕಾಯಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ನಂ. ವಿಜಯ ಕುಮಾರ, ವಾಮನರಾವ್ ಅಭಿಮಾನಿ ಬಳಗದವರು ಅವರಿಗೆ ಅಭಿನಂದಿಸಿದ್ದಾರೆ.

ಗಂಗಾವತಿ ಫ್ಯಾನ್ಸಿ ಸ್ಟೋರ್ ನಲ್ಲಿ ನಶೆ ಬರುವ ಟ್ಯಾಬ್ಲೆಟ್ ಮಾರಾಟ: ಪ್ರಕರಣ ದಾಖಲು- ಯುವಕರಿಗೂ ಲಿಂಕ್: ವ್ಯಕ್ತಿಯೋರ್ವನ ಹೇಳಿಕೆ

ಗಂಗಾವತಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಪ್ರಕರಣ ಇತ್ಯರ್ಥ: ರೂ. 8.48 ಕೋಟಿ ಸರಕಾರಕ್ಕೆ ಜಮೆ- ಮನಸ್ಥಾಪ ಬಿಟ್ಟು ಒಂದಾದ ಮೂವ್ವರು ದಂಪತಿಗಳು

ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ ಅದಾಲತ್- ರೂ.44.44 ಕೋಟಿ ಮೌಲ್ಯದ 49953 ಪ್ರಕರಣಗಳು ಇತ್ಯರ್ಥ- ಮನಸ್ಥಾಪ ಬಿಟ್ಟು ಒಂದಾದ ಏಳು ದಂಪತಿಗಳು
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಿರುಳ್ಗನ್ನಡ ನಾಡಿನ ಕೀರ್ತಿ ಕೋಟಗಿಗೆ ಅಭಿನಂದನೆಗಳ ಮಹಾಪೂರ